8ನೇ ತರಗತಿ ವಿಜ್ಞಾನ ಅಧ್ಯಾಯ 14: ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು | 8th Standard Science Chapter 14 Notes in Kannada

ಈ ಲೇಖನದಲ್ಲಿ 8th Class Science Chapter 14 Kannada Notes ಅಡಿಯಲ್ಲಿ 8ನೇ ತರಗತಿ ವಿಜ್ಞಾನ ಅಧ್ಯಾಯ 14 ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ನೋಟ್ಸ್‌, ಪಠ್ಯಪುಸ್ತಕ ಆಧಾರಿತ ಪ್ರಶ್ನೋತ್ತರಗಳು, ಮುಖ್ಯ ವ್ಯಾಖ್ಯಾನಗಳು ಮತ್ತು ಸುಲಭವಾಗಿ ಅರ್ಥವಾಗುವ ವಿವರಣೆಗಳನ್ನು ನೀಡಲಾಗಿದೆ. KSEEB ಪಠ್ಯಕ್ರಮದಂತೆ ಸಿದ್ಧಪಡಿಸಿರುವ ಈ ಅಧ್ಯಯನ ಸಾಮಗ್ರಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಅತ್ಯಂತ ಉಪಯುಕ್ತವಾಗಿದ್ದು, ಶಿಕ್ಷಕರಿಗೂ ಪಾಠ ಬೋಧನೆಗೆ ಸಹಾಯಕವಾಗುತ್ತದೆ. Class 8 Science Chapter 14 Kannada Notes ಹುಡುಕುತ್ತಿರುವ ವಿದ್ಯಾರ್ಥಿಗಳು ಈ ವಿಷಯವನ್ನು ಸರಳವಾಗಿ ಕಲಿಯಲು ಇದು ಉತ್ತಮ ಸಂಪನ್ಮೂಲವಾಗಿದೆ.

8th Class Science Chapter 14 Kannada Notes – ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಪ್ರಶ್ನೋತ್ತರಗಳು

“8th Class Science Chapter 14 Notes on Electrical Current Chemical Effects in Kannada”

1. ಬಿಟ್ಟ ಸ್ಥಳವನ್ನು ತುಂಬಿರಿ;

(a) ವಿದ್ಯುತ್ ವು  ಹರಿಯಲು ಬಿಡುವ ಹೆಚ್ಚಿನವು ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳ ದ್ರಾವಣಗಳಾಗಿವೆ.

(b) ದ್ರಾವಣದ ಮೂಲಕ ವಿದ್ಯುತ್ ಹರಿಯುವುದರಿಂದ ರಾಸಾಯನಿಕ ಪರಿಣಾಮವು ಉಂಟಾಗುತ್ತದೆ.

(c) ತಾಮ್ರದ ಸಲ್ಪೇಟ್ ನ್ನು  ದ್ರಾವಣದ ಮೂಲಕ ವಿದ್ಯುತ್ ಹರಿಸಿದಾಗ, ತಾಮ್ರ ಸಂಗ್ರಹಣೆ ಯಾಗುವ ಪಟ್ಟಿಯನ್ನು ಬ್ಯಾಟರಿಯ ಋಣ ತುದಿಗೆ ಜೋಡಿಸಲಾಗುತ್ತದೆ.

(d) ಒಂದು ಲೋಹದ ಮೇಲೆ ಇನ್ನೊಂದು ಲೋಹದ ತೆಳುಪದರದ ಲೇಪನವನ್ನು ವಿದ್ಯುತ್ ಹರಿಸುವ ಮೂಲಕ ಮಾಡುವ ಪ್ರಕ್ರಿಯೆಗೆ ವಿದ್ಯುಲ್ಲೇಪನ ಎಂದು ಕರೆಯುತ್ತಾರೆ.

2. ಪರೀಕ್ಷಕದ ಎರಡು ತುದಿಗಳನ್ನು ದ್ರಾವಣದಲ್ಲಿ ಮುಳುಗಿಸಿದಾಗ, ಕಾಂತಸೂಜಿ ವಿಚಲನೆಯನ್ನು ತೋರಿಸುತ್ತವೆ. ಇದಕ್ಕೆ ಕಾರಣ ಕೊಡಬಲ್ಲಿರಾ ?

ಉತ್ತರ: ಕಾಂತಸೂಜಿಯ ವಿಚಲನೆಯು ತನ್ನ ಸುತ್ತ ಸುತ್ತುತ್ತಿರುವ ವಾಹಕತಂತಿಯಲ್ಲಿ ವಿದ್ಯುತ್ ಹರಿಯುವಿಕೆಯನ್ನು, ಅಂದರೆ ಮಂಡಲದಲ್ಲಿ ವಿದ್ಯುತ್ ಹರಿಯುವಿಕೆಯನ್ನು ದೃಢಪಡಿಸುತ್ತವೆ. ಪರೀಕ್ಷಕದ ಎರಡು ತುದಿವನ್ನು  ದ್ರಾವಣದಲ್ಲಿ ಮುಳುಗಿಸಿರುವುದರಿಂದ, ಮಂಡಲವು ಪೂರ್ಣಗೊಂಡಿದೆ, ದ್ರಾವಣವು ಖಂಡಿತವಾಗಿ ವಿದ್ಯುತ್ ವಾಹಕವಾಗಿ ಇರುತ್ತದೆ. ಅದ್ದರಿಂದ, ಕಾಂತಸೂಜಿಯು ವಿಚಲನೆಯನ್ನು ತೋರಿಸುತ್ತದೆ.

3. ಪರೀಕ್ಷಕದ ಮೂಲಕ ಚಿತ್ರ 14.9 ರಲ್ಲಿ ತೋರಿಸಿರುವಂತೆ, ಪರೀಕ್ಷಿಸಿದರೆ ಕಾಂತಸೂಜಿ ತನ್ನ ವಿಚಲನೆ ತೋರಿಸುವ ಮೂರು ದ್ರಾವಣಗಳನ್ನು ಹೆಸರಿಸಿರಿ.

ಉತ್ತರ; ಪರೀಕ್ಷಕದ ಮೂಲಕ ಚಿತ್ರ 14,9 ರಲ್ಲಿ ತೋರಿಸಿರುವಂತೆ, ಪರೀಕ್ಷಿಸಿದರೆ ಕಾಂತಸೂಜಿ ತನ್ನ ವಿಚಲನೆ ತೋರಿಸುವ ಮೂರು ದ್ರಾವಣಗಳು  ನಿಂಬೆರಸ, ಉಪ್ಪುನೀರು ಮತ್ತು ವಿನೇಗರ್ ಆಗಿವೆ.

ವಿದ್ಯುತ್‌ಜ್ಜಲವಿಕ್ರಿಯಾ ಪ್ರಯೋಗ 8ನೇ ತರಗತಿ (Electrolysis Experiment 8th Class)

4. ಚಿತ್ರ 14.10 ರಲ್ಲಿ ತೋರಿಸಿರುವ ಹಾಗೆ ಬಲ್ಪ್ ಬೆಳಗುವುದಿಲ್ಲ. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡಿರಿ, ನಿಮ್ಮ ಉತ್ತರವನ್ನು ವಿವರಿಸಿರಿ.

“8ನೇ ತರಗತಿ ವಿಜ್ಞಾನ ವಿದ್ಯುತ್ ಹರಿವು ರಾಸಾಯನಿಕ ಪರಿಣಾಮ – ವಿದ್ಯುತ್‌ಜ್ಜಲವಿಕ್ರಿಯಾ ಪ್ರಯೋಗ”

ಉತ್ತರ: ನೀಡಿರುವ ಸಂದರ್ಭದಲ್ಲಿ ಬಲ್ಪ್ ಬೆಳಗದಿರಲು ಕಾರಣಗಳು ಕಳಗಿವೆ.

01] ಬೀಕರಿನಲ್ಲಿನ ದ್ರವವು ವಿದ್ಯುತ್ ವಾಹಕದಲ್ಲದಿರಬಹುದು, ಆದರಿಂದ ಮಂಡಲವು ಪೂರ್ಣಗೊಂಡಿರುವುದಿಲ್ಲ.

02) ಮಂಡಲವನ್ನು ರಚಿಸಲು ಬಳಸಿರುವ ತಂತಿಯು ವಿದ್ಯುತ್ತಿನ ಉತ್ತಮ ವಾಹಕ ಇಲ್ಲದಿರಬಹುದು,

03) ಮಂಡಲದಲ್ಲಿಯಿರುವ ಬ್ಯಾಟರಿಯು ವಿದ್ಯುತ್ತನ್ನು ಉತ್ಪಾದಿಸುವಷ್ಟು ಶಕ್ತಿಯನ್ನು ಹೊಂದಿಲ್ಲದಿರಬಹುದು,

04) ಬಲ್ಪ್ ನ ತಂತಿಯು ಕರಗಿರಬಹುದು.

05) ಮಂಡಲದಲ್ಲಿರುವ ಜೋಡಣೆಯು ಸಡಿಲಗೊಂಡಿರಬಹುದು.

ವಿದ್ಯುತ್ ಹರಿವು ಪರಿಣಾಮ ಪ್ರಶ್ನೋತ್ತರ (Electrical Current Effects Q&A)/

5. A ಮತ್ತು B ಎಂದು ಗುರುತಿಸಿರುವ ಎರಡು ದ್ರಾವಣಗಳ ವಿದ್ಯುದ್ವಾಹಕತೆಯನ್ನು ಪರೀಕ್ಷಿಸುವ ಸಲುವಾಗಿ ಪರೀಕ್ಷಕವನ್ನು ಉಪಯೋಗಿಸಲಾಗಿದೆ, A ಎಂದು ಗುರುತಿಸಿದ  ದ್ರವದಲ್ಲಿ ಬಲ್ಪ್ ಹೆಚ್ಚು ಪ್ರಕಾಶಮಾನವಾಗಿ ಬೆಳಗಿದೆ. b ದ್ರವದಲ್ಲಿ ಅದು ತುಂಬಾ ಹೆಚ್ಚಾಗಿ ಬೆಳಗಿರುವುದು ಕಂಡುಬಂತು, ಇದರಿಂದ ನೀವು ಈ ಕೆಳಗಿನ ಯಾವ ತೀರ್ಮಾನಕ್ಕೆ ಬರುವಿರಿ?

ಉತ್ತರ: (1) ದ್ರವ A, ದ್ರವ B ಗಿಂತ ಉತ್ತಮ ವಾಹಕವಾಗಿವೆ.

6. ಸಂಪೂರ್ಣ ಆಸವಿತ ನೀರಿನ ಮೂಲಕ ವಿದ್ಯುತ್ ಹರಿಯುತ್ತದೆಯೇ? ಇಲ್ಲದಿದ್ದಲ್ಲಿ ವಿದ್ಯುತ್ವಾಹಕವಾಗಲು ಏನು ಮಾಡಬೇಕು? ತಿಳಿಸಿ.

ಉತ್ತರ: ಇಲ್ಲ,  ಸಂಪೂರ್ಣ ಆಸವಿತ ನೀರಿನ ಮೂಲಕ ವಿದ್ಯುತ್ ವು  ಹರಿಯುವುದಿಲ್ಲ. ಕಾರಣವೆಂದರೆ, ಆಸವಿತ ನೀರಿನಲ್ಲಿ ಯಾವುದೇ ರಿತೀಯ ಲವಣಗಳು ವಿಲೀನಗೊಂಡಿರುವುದಿಲ್ಲ. ಆಸವಿತ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸುವುದರಿಂದ ಅದನ್ನು ವಿದ್ಯುತ್ ವಾಹಕವನ್ನಾಗಿ ಮಾಡಬಹುದು.

7. ಬೆಂಕಿ ಹೊತ್ತಿಕೊಂಡಾಗ, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಲು ನೀರನ್ನು ಉಪಯೋಗಿಸುವ ಮೊದಲು ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸುತ್ತಾರೆ. ಇದಕ್ಕೆ ಕಾರಣವನ್ನು ತಿಳಿಸಿರಿ.

ಉತ್ತರ: ನೀರು ತನ್ನ ಮೂಲಕ ವಿದ್ಯುತ್  ಹರಿಸಬಹುದು. ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜ ಅನ್ನು ನಿಲ್ಲಿಸದಿದ್ದರೆ, ನೀರು ವಿದ್ಯುತ್ ಉಪಕರಣಗಳ ಒಳಗೆ ಸೇರಿ ವಿದ್ಯುತ್ ಅವಘಡಕ್ಕೆ ಕಾರಣವಾಗಬಹುದು, ಆದ್ದರಿಂದ, ಬೆಂಕಿಯು ಹೊತ್ತಿಕೊಂಡಾಗ, ಅಗ್ನಿಪಾದಕ ಸಿಬ್ಬಂದಿ ಬೆಂಕಿಯನ್ನು ಆರಿಸಲು ನೀರನ್ನು ಉಪಯೋಗಿಸುವ ಮೊದಲು ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸುತ್ತಾರೆ.

Electrolysis Experiment – 8th Class Science Chapter 14 Notes

8. ಕರಾವಳಿ ತೀರ ಪ್ರದೇಶದಲ್ಲಿ ಇರುವ ಮಗು, ಕುಡಿದ ನೀರನ್ನು ಮತ್ತು ಸಮುದ್ರದಲ್ಲಿನ ನೀರನ್ನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾನೆ. ಕಾಂತಸೂಜಿಯ, ಬಾಗುವಿಕೆಯ ಪ್ರಮಾಣ ಸಮುದ್ರದ ನೀರಿನಲ್ಲಿ ಹೆಚ್ಚಾಗಿ   ಇರುವುದನ್ನು ಕಂಡುಕೊಳ್ಳುತ್ತಾನೆ, ಅದಕ್ಕೆ ಕಾರಣ ತಿಳಿಸಿ.

ಉತ್ತರ: ವಿಲೀನಗೊಂಡಿರುವ ಲವಣಗಳ ಪ್ರಮಾಣವು ಕುಡಿಯುವ ನೀರಿಗಿಂತ ಸಮುದ್ರದ ನೀರಿನಲ್ಲಿ ಅತ್ಯಂತ ಹೆಚ್ಚಾಗಿರುತ್ತದೆ. ಇದರಿಂದ  ಸಮುದ್ರದ ನೀರು ಕುಡಿಯುವ ನೀರಿಗಿಂತ ಹೆಚ್ಚು ವಿದ್ಯುತ್ತನ್ನು ತನ್ನ ಮೂಲಕ ಹರಿಸಬಲ್ಲದು. ಆದ್ದರಿಂದ, ಕಾಂತಸೂಜಿಯ ಬಾಗುವಿಕೆಯ ಪ್ರಮಾಣವು ಸಮುದ್ರದ ನೀರಿನಲ್ಲಿ ಹೆಚ್ಚಿರುವುದನ್ನು ಅವನು ಕಂಡುಕೊಳ್ಳುತ್ತಾನೆ.

9. ಜೋರಾಗಿ ಮಳೆ ಬರುತ್ತಿರುವಾಗ, ಎಲೆಕ್ಟ್ರಿಷಿಯನ್ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುವುದು ಸೂಕ್ತವೇ?ಎಂಬುವುದು  ವಿವರಿಸಿ .

ಉತ್ತರ: ಇಲ್ಲ. ಜೋರಾಗಿ ಮಳೆ ಬರುತ್ತಿರುವ ಸಂದರ್ಭದಲ್ಲಿ ಎಲೆಕ್ಟ್ರಿಷಿಯನ್ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುವುದು ಸೂಕ್ತವಲ್ಲ. ಏಕೆಂದರೆ, ಮಳೆಯ ನೀರು ವಿಲೀನಗೊಂಡಿರುವ ಲವಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅದು ತನ್ನ ಮೂಲಕ ವಿದ್ಯುತ್ತನ್ನು ಹರಿಸುತ್ತದೆ, ಇದರ ಪರಿಣಾಮವಾಗಿ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುತ್ತಿರುವ ಎಲೆಕ್ಟ್ರಿಷಿಯನ್ ವಿದ್ಯುತ್ ಅವಘಡಕ್ಕೆ ತುತ್ತಾಗಬಹುದು.

10. ಪಹೇಲಿ ಮಳೆಯ ನೀರು ಸಂಪೂರ್ಣ ಆಸವಿತ ನೀರಿನಷ್ಟೇ ಶುದ್ಧವಾಗಿರುತ್ತದೆ ಎಂಬುವುದನ್ನು ಕೇಳಿರುತ್ತಾಳೆ,  ಆದ್ದರಿಂದ ಅವಳು ಮಳೆಯ ನೀರನ್ನು ಗಾಜಿನ ಲೋಟದಲ್ಲಿ ಸಂಗ್ರಹಿಸಿಟ್ಟು, ಅದನ್ನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾಳೆ. ಅವಳಿಗೆ ಆಶ್ಚರ್ಯವು  ಕಾದಿರುತ್ತದೆ. ಅವಳಿಗೆ ಕಾಂತಸೂಜಿಯ ವಿಚಲನೆ ಕಂಡುಬಂತು, ಹೀಗೆ ಆಗಲು ಕಾರಣವೇನು?

ಉತ್ತರ: ಆಸವಿತ ನೀರಿನಲ್ಲಿ ಯಾವುದೇ ಲವಣ ಅಂಶಗಳು ವಿಲೀನಗೊಂಡಿರುವುದಿಲ್ಲ. ಆದ್ದರಿಂದ ಅದು ವಿದ್ಯುತ್ ನ ದುರ್ಬಲ ವಾಹಕವಾಗಿ ಇರುತ್ತದೆ, ಆದರೆ ಮಳೆಯ ನೀರು ವಿಲೀನಗೊಂಡಿರುವ ಲವಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅದು ತನ್ನ ಮೂಲಕ ವಿದ್ಯುತ್ ಹರಿಸುತ್ತದೆ. ಆದ್ದರಿಂದ, ಪಹೇಲಿಗೆ ಮಳೆಯ ನೀರಿನಲ್ಲಿ ಪರೀಕ್ಷಕದ ಕಾಂತಸೂಚಿಯ ವಿಚಲನೆಯು ಕಂಡುಬಂತು

11. ನಿಮ್ಮ ಸುತ್ತಲೂ ಕಂಡುಬರುವ ವಿದ್ಯುತ್‌ ಲೇಪಿತ ವಸ್ತುಗಳನ್ನು ಪಟ್ಟಿ ಮಾಡಿ,

ಉತ್ತರ: ನಮ್ಮ ಸುತ್ತಲೂ ಕಂಡುಬರುವ ಕೆಲವು ವಿದ್ಯುತ್‌ ಲೇಪಿತ ವಸ್ತುಗಳು ಈ ಕೆಳಕಂಡಂತಿವೆ.

01] ಕಾರಿನ ಭಾಗಗಳು, ಸ್ನಾನಗೃಹದ ನಲ್ಲಿಗಳು, ಅಡಿಗೆಮನೆಯ ಗ್ಯಾಸ್ ಬರ್ನರ್ ಗಳು, ಸೈಕಲ್ ಹ್ಯಾಂಡಲ್ಗಳು, ಸೈಕಲ್ ಚಕ್ರದ ರಿಮ್ಗಳು ಹಾಗೂ ಇತರೆ ಅನೇಕ ವಸ್ತುಗಳಿಗೆ ಹೊಳಪನ್ನು ನೀಡಲು ಕ್ರೋಮಿಯಂನ ಲೇಪನವನ್ನು  ಮಾಡುತ್ತಾರೆ.

02) ಆಭರಣ ತಯಾರಕರು ಬೆಳ್ಳಿ ಮತ್ತು ಚಿನ್ನದ ವಿದ್ಯುತ್  ಲೇಪನವನ್ನು ಕಡಿದು ಬೆಲೆ ಬಾಳುವ ಲೋಹದ ಮೇಲೆ ಮಾಡುತ್ತಾರೆ.

03) ಆಹಾರ ಪದಾರ್ಥಗಳನ್ನು ಸಂಗ್ರಹಿಸಿ  ಉಪಯೋಗಿಸುವ ತವರದ ಕ್ಯಾನ್ ಗಳನ್ನು ಕಬ್ಬಿಣದ ಮೇಲೆ ತವರದ ಲೇಪನವನ್ನು  ಮಾಡಿ ತಯಾರಿಸುತ್ತಾರೆ.

04) ಸೇತುವೆಗಳು ಮತ್ತು ಆಟೋಮೊಬೈಲ್ಗಳಲ್ಲಿ ಕಬ್ಬಿಣದ ಸಂಕ್ಷಾರಣ ಮತ್ತು ತುಕ್ಕು ಹಿಡಿಯುವುದನ್ನು ತಡೆಯುವ ಸಲುವಾಗಿ ಕಬ್ಬಿಣದ ಮೇಲೆ ತೆಳುವಾದ ಸತುವಿನ ಲೇಪನ ಮಾಡುತ್ತಾರೆ.

Chemical Effects of Electric Current – 8th Class Science Notes in kannada

12. ನೀವು ನೋಡಿರುವಂತೆ 14.7ನೇ ಚಟುವಟಿಕೆಯನ್ನು ತಾಮ್ರದ ಶುದ್ದೀಕರಣ ಪ್ರಕ್ರಿಯಯಲ್ಲಿ ಉಪಯೋಗಿಸಲಾಗುತ್ತದೆ. ತೆಳುವಾದ ಶುದ್ಧವಾದ ತಾಮ್ರದ ಪಟ್ಟಿ ಮತ್ತು ದಪ್ಪದಾಗಿರುವ ಅಶುದ್ಧ ತಾಮ್ರದ ದಂಡವನ್ನು ವಿದ್ಯುದ್ವಾರಗಳಾಗಿ ಉಪಯೋಗಿಸಲಾಗಿದೆ.

ಅಶುದ್ಧ ತಾಮ್ರದ ದಂಡದಿಂದ ತಾಮ್ರದ, ತೆಳುವಾದ ತಾಮ್ರದ ಪಟ್ಟಿಗೆಯನ್ನು  ವರ್ಗಾವಣೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಯಾವ ವಿದ್ಯುದ್ವಾರವನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು? ಮತ್ತು ಅದಕ್ಕೆ ಕಾರಣವೇನು?

ಉತ್ತರ: ತಾಮ್ರವು ಧನ ಆದೇಶವನ್ನು ಹೊಂದಿದ್ದು, ಅದು ಬ್ಯಾಟರಿಯ ಋಣಾಗ್ರದ ಕಡೆಗೆ  ಜೋಡಿಸಿರುವ ಪಟ್ಟಿಯ ಕಡೆಗೆ ಆಕರ್ಷಿಸಲ್ಪಡುತ್ತದೆ. ಅಶುದ್ಧ ತಾಮ್ರದ ದಂಡದಿಂದ ತಾಮ್ರವು ತೆಳುವಾದ ತಾಮ್ರದ ಪಟ್ಟಿಗೆಗೆ  ವರ್ಗಾವಣೆಯಾಗಬೇಕಾಗಿರುವುದರಿಂದ, ತೆಳುವಾದ ತಾಮ್ರದ ಪಟ್ಟಿಯನ್ನು ಬ್ಯಾಟರಿಯ ಧನಾಗ್ರದ ಕಡೆಗೆ  ಜೋಡಿಸಬೇಕು, ಇದರಿಂದ  ಅಶುದ್ದ ತಾಮ್ರದ ದಂಡವನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು.

13. ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ ಎಂದರೇನು? ಉದಾಹರಿಸಿ,

ಉತ್ತರ: ವಿದ್ಯುತ್‌ ವಾಹಕ  ದ್ರಾವಣಗಳ ಮೂಲಕ ವಿದ್ಯುತ್ ಹರಿದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆ, ಇದರಿಂದಾಗುವ ಪರಿಣಾಮವನ್ನು ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ ಎಂದು ಕರೆಯುತ್ತಾರೆ. ಉದಾಹರಣೆಗೆ: ವಿದ್ಯುಲ್ಲೇಪನ

ಸಂಬಂಧಪಟ್ಟ ಅಧ್ಯಾಯಗಳಿಗಾಗಿ 8ನೇ ತರಗತಿ ವಿಜ್ಞಾನ ಇತರೆ ಅಧ್ಯಾಯಗಳ ನೋಟ್ಸ್‌ಗಳಿಗೆ ಲಿಂಕ್ ಪರಿಶೀಲಿಸಿ.

KSEEB Class 8 Science Chapter 11 Notes – ಜೀವಕೋಶ: ರಚನೆ ಮತ್ತು ಕಾರ್ಯಗಳು (Complete Answers PDF)

Ncert/ Kseeb science of class 8: ಅಧ್ಯಾಯ -12 ಪ್ರಾಣಿಗಳಲ್ಲಿ ಸಂತಾನೋತ್ಪತಿ Notes

FAQS

Q1: ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಎಂದರೆ ಏನು?

A: ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಎಂದರೆ, ವಿದ್ಯುತ್ ಹರಿಯುವಾಗ ವಿದ್ಯುತ್‌ ವಾಹಕ ದ್ರಾವಣಗಳಲ್ಲಿ ರಾಸಾಯನಿಕ ಕ್ರಿಯೆಗಳು ನಡೆಯುವ ಪರಿಣಾಮ. ಉದಾಹರಣೆಗೆ, ತಾಮ್ರದ ಲೋಹದ ಮೇಲೆ ಇನ್ನೊಂದು ಲೋಹದ ತೆಳುಪದರವನ್ನು ಲೇಪನ ಮಾಡುವುದು

Q2: ಸಂಪೂರ್ಣ ಆಸವಿತ ನೀರಿನ ಮೂಲಕ ವಿದ್ಯುತ್ ಹರಿಯುತ್ತದೆಯೆ?

A: ಇಲ್ಲ. ಸಂಪೂರ್ಣ ಆಸವಿತ ನೀರಿನಲ್ಲಿ ಯಾವುದೇ ಲವಣಗಳು ವಿಲೀನಗೊಂಡಿಲ್ಲ. ಆದ್ದರಿಂದ ಅದು ದುರ್ಬಲ ವಿದ್ಯುತ್ ವಾಹಕ. ವಿದ್ಯುತ್ ಹರಿಸಲು ಸ್ವಲ್ಪ ಉಪ್ಪು ಸೇರಿಸಿದರೆ, ನೀರು conduct ಮಾಡುತ್ತದೆ.

Q3: ವಿದ್ಯುತ್‌ ಲೇಪಿತ ವಸ್ತುಗಳು ಯಾವುವು?

A: ನಮ್ಮ ಸುತ್ತಲೂ ಕೆಲವು ವಸ್ತುಗಳು Electroplated ಆಗಿವೆ:
ಕಾರಿನ ಭಾಗಗಳು, ಸೈಕಲ್ ಹ್ಯಾಂಡಲ್ಗಳು
ಆಭರಣಗಳು (ಚಿನ್ನ, ಬೆಳ್ಳಿ)
ಆಹಾರ ಪದಾರ್ಥವನ್ನು ಸಂಗ್ರಹಿಸುವ ಟಿನ್ cans
ಸೇತುವೆಗಳು ಮತ್ತು ಆटोಮೊಬೈಲ್ಗಳ ಕಬ್ಬಿಣದ ಭಾಗಗಳು corrosion ತಡೆಗಟ್ಟಲು

Leave a Comment

Your email address will not be published. Required fields are marked *

Scroll to Top